ಯಕ್ಷಗಾನಕ್ಕೆ ಹೊಸ ತಲೆಮಾರಿನ ಕಲಾವಿದರು ಬರಲಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಮ೦ಗಳವಾರ, ಒಕ್ಟೋಬರ್ 22 , 2013
|
ಒಕ್ಟೋಬರ್ 22 , 2013
|
ಯಕ್ಷಗಾನಕ್ಕೆ ಹೊಸ ತಲೆಮಾರಿನ ಕಲಾವಿದರು ಬರಲಿ
ಸುರತ್ಕಲ್ :
ಹೊಸ ತಲೆಮಾರಿನ ಕಲಾವಿದರು ಯಕ್ಷಗಾನಕ್ಕೆ ಪ್ರವೇಶಿಸಿ ಈ ಕಲೆಯ ಸತ್ವ, ತತ್ವ ಬೆಳೆಸಬೇಕು. ಆಧುನಿಕತೆ ಪರಿಣಾಮ ಏನಿದ್ದರೂ ಇದರಿಂದ ಯಕ್ಷಗಾನದ ರೂಪಾಂತರ ಮಾತ್ರ ಆದೀತು ವಿನಃ ಯಕ್ಷಗಾನ ನಾಶವಾಗದು ಎಂದು ಪ್ರಸಿದ್ದ ಯಕ್ಷಗಾನ ಕಲಾವಿದ ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ಹೇಳಿದರು.
ಅವರು ಭಾನುವಾರ ಸುರತ್ಕಲ್ನ ಯಕ್ಷಮಿತ್ರರು ಸಂಸ್ಥೆ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ನಿವತ್ತ ಪ್ರಿನ್ಸಿಪಾಲ್ ಪ್ರೊ ಪಿ. ಕೆ. ಮೊಯ್ಲಿ ಆಧ್ಯಕ್ಷತೆ ವಹಿಸಿದ್ದರು.
ಇಡ್ಯಾ ಶ್ರೀಮಹಾಲಿಂಗೆಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ಐ.ರಮಾನಂದ ಭಟ್ ಆಶೀರ್ವಚನ ನೀಡಿ, ಯಕ್ಷಗಾನದಿಂದ ನಮ್ಮ ಸಂಸ್ಕೃತಿ ಉಳಿಯುತ್ತಿದೆ ಎಂದರು.
ಪ್ರಸಿದ್ದ ಅರ್ಥದಾರಿ ರಾದಾಕಷ್ಣ ಕಲ್ಚಾರ್ ಮಾತನಾಡಿ, ತಾಳಮದ್ದಳೆ ಕೂಟಗಳಲ್ಲಿ ಪ್ರೇಕ್ಷಕರು ಜಾಗತರಾಗಿ ಕಲಾವಿದರನ್ನು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಇದರಿಂದ ಕಲಾವಿದರು ಜಾಗತರಾಗುವುದು ಸಾಧ್ಯ ಆದರೆ ಇಂದು ಅಂಥಾ ಪ್ರೇಕ್ಷಕರು ತೀರಾ ವಿರಳವಾಗಿದ್ದಾರೆ ಎಂದರು.
ಈ ಸಂದರ್ಭ ಪ್ರಸಿದ್ದ ಅರ್ಥದಾರಿ ರಾಧಾಕಷ್ಣ ಕಲ್ಚಾರ್, ಯಕ್ಷಗಾನ ಕಾರ್ಯಕ್ರಮಗಳ ಸಂಘಟಕ ವಾಸುದೇವ ಆಚಾರ್ಯ ಕುಳಾಯಿ ಅವರಿಗೆ ನಗದು, ಸ್ಮರಣಿಕೆ, ಸನ್ಮಾನಪತ್ರ ನೀಡಿ, ಸನ್ಮಾನ ನಡೆಯಿತು. ಸನ್ಮಾನಕ್ಕೆ ಉತ್ತರಿಸಿ ರಾಧಾಕಷ್ಣ ಕಲ್ಚಾರ್ ಮಾತನಾಡಿದರು. ವಾಸುದೇವ ಅಚಾರ್ಯ ಕುಳಾಯಿ ಮಾತನಾಡಿ, ಈ ಸನ್ಮಾನದಿಂದ ತನಗೆ ರಾಜ್ಯೋತ್ಸವ ಪ್ರಶಸ್ತಿ ಬಂದಷ್ಟೇ ಸಂತಸವಾಗಿದೆ ಎಂದರು.
ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ವಿಜೇತ ಮಹಾಬಲ ಪೂಜಾರಿ ಕಡಂಬೋಡಿ ಶುಭ ಹಾರೈಸಿದರು.
ಯಕ್ಷಮಿತ್ರ ಸಂಸ್ಥೆಯ ನಾಗರಾಜ್ ಕಡಂಬೋಡಿ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ಪ್ರೇಮ್ ಶೆಟ್ಟಿ ಮುಂಬಯಿ, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಯದರ್ಶಿ ಕೆ. ರಾಜೇಶ್ ಕುಮಾರ್, ಕೋಶಾಧಿಕಾರಿ ಜಗದೀಪ್ ಶೆಟ್ಟಿ, ಜತೆ ಕಾರ್ಯದರ್ಶಿಗಳಾದ ತ್ರಿಲೋಕ್ ಕುಮಾರ್, ಕುಸುಮಾಕರ ಖಂಡಿಗೆ ಉಪಸ್ಥಿತರಿದ್ದರು.
ಶರತ್ ಶೆಟ್ಟಿ ಕಿನ್ನಿಗೋಳಿ ಸ್ವಾಗತಿಸಿದರು. ಪುಷ್ಪರಾಜ್ ಶೆಟ್ಟಿ ಕುಡುಂಬೂರು ವರದಿ ವಾಚಿಸಿದರು.
ವಾದಿರಾಜ ಕಲ್ಲೂರಾಯ ಸನ್ಮಾನಪತ್ರ ವಾಚಿಸಿದರು. ಭಾಸ್ಕರ ನೆಲ್ಲಿತೀರ್ಥ ಕಾರ್ಯಕ್ರಮ ನಿರ್ವಹಿಸಿದರು. ಪ್ರಸಿದ್ದ ಕಲಾವಿದರಿಂದ ಭೀಷ್ಮ ಪ್ರತಿಜ್ಞೆ ಯಕ್ಷಗಾನ ತಾಳಮದ್ದಳೆ, ಪ್ರಸಿದ್ದ ಭಾಗವತರರಿಂದ ಗಾನವೆಭವ ಕಾರ್ಯಕ್ರಮ ಹಾಗೂ ಚಂದಾವಳಿ ವಿಲಾಸ ಯಕ್ಷಗಾನ ಬಯಲಾಟ ನಡೆಯಿತು. ಇಡ್ಯಾ ಶ್ರೀಮಹಾಲಿಂಗೇಶ್ವರ ದೇವಸ್ಥಾನವ ವಠಾರದಲ್ಲಿ ಆಯೋಜಿಸಲಾಗಿತ್ತು.
ಕೃಪೆ : http://vijaykarnataka.indiatimes.com/
|
|
|